
Dr. Ravi C. T 🇮🇳 ಡಾ. ರವಿ ಸಿ. ಟಿ
@CTRavi_BJP • 353,594 subscribers
ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ, ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, MLC KARNATAKA, Proud Kannadiga, BJP Karyakarta
Shorts
Videos

I can watch this endlessly 👌 #VendumMeendumModi
Dr. Ravi C. T 🇮🇳 ಡಾ. ರವಿ ಸಿ. ಟಿ297,402 views • 2 years ago

ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು. ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತಿದ್ದಾರೆ. ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್ ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗು ಕಾಂಗ್ರೇಸ್ ಸರ್ಕಾರವೇ ಕಾರಣ.
Dr. Ravi C. T 🇮🇳 ಡಾ. ರವಿ ಸಿ. ಟಿ105,619 views • 1 year ago

Bharat Mata Ki Jai 🇮🇳. Vande Mataram. #OperationSindoor
Dr. Ravi C. T 🇮🇳 ಡಾ. ರವಿ ಸಿ. ಟಿ62,759 views • 1 year ago

ವಿಧಾನ ಪರಿಷತ್ತಿನ ಕಲಾಪ ಅನಿರ್ಧಿಷ್ಠಾವಧಿಗೆ ಮುಂದೂಡಿದ ಬಳಿಕ ಕಾಂಗ್ರೇಸ್ ಸರ್ಕಾರದ "ಗೌರವಾನ್ವಿತ ಮಂತ್ರಿಗಳು", ಕಾಂಗ್ರೆಸ್ಸಿನ ಶಾಸಕರು ನಡೆಸಿದ ದಾಂಧಲೆಗೆ ವಿಡಿಯೋ - ಆಡಿಯೋ ಸಾಕ್ಷಿ ಇದೆ. ಸರ್ಕಾರದ ಸಚಿವರು ಸುವರ್ಣ ಸೌಧದಲ್ಲಿ ನಡೆಸಿದ ಗೂಂಡಾ ವರ್ತನೆಗೆ ಸಾಕ್ಷ್ಯಾಧಾರವಿದೆ ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತಿರಿ ಸನ್ಮಾನ್ಯ "ನ್ಯಾಯನೀತಿಪರ" ಮುಖ್ಯಮಂತ್ರಿಗಳೇ? ಸಾಕ್ಷ್ಯಾಧಾರಗಳಿಲ್ಲದ ಸುಳ್ಳುಸುದ್ದಿ ಹಬ್ಬಿಸುವ, ಅಪಪ್ರಚಾರ ಮಾಡುವ ಕೆಲಸ ಮಾಡುವ ಬದಲಾಗಿ ಕ್ಯಾಮರಾದಲ್ಲಿ ದಾಖಲಾಗಿರುವ ಆಧಾರ ಗಮನಿಸಿ ಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಿ ಮುಖ್ಯಮಂತ್ರಿಗಳೇ
Dr. Ravi C. T 🇮🇳 ಡಾ. ರವಿ ಸಿ. ಟಿ54,778 views • 1 year ago

ಇಂದು ಮದ್ದೂರಿಗೆ ಭೇಟಿಕೊಟ್ಟಾಗ ನನ್ನ ಹಿಂದೂ ಕಾರ್ಯಕರ್ತರೊಡನೆ.
Dr. Ravi C. T 🇮🇳 ಡಾ. ರವಿ ಸಿ. ಟಿ31,271 views • 9 months ago

ಬೆಂಗಳೂರಿನಿಂದ ನನ್ನೂರು ಚಿಕ್ಕಮಗಳೂರಿಗೆ ಬರುವ ಹಾದಿಯಲ್ಲಿ ಕುಣಿಗಲ್ , ಚೆನ್ನರಾಯಪಟ್ಟಣ , ಹಾಸನ ಹಾಗು ಬೇಲೂರಿನ BJP ಹಾಗು NDA ಅಂಗಪಕ್ಷವಾದ Janata Dal Secular ಪಕ್ಷದ ಕಾರ್ಯಕರ್ತ ಬಂಧುಗಳು, ಸತ್ಯಕ್ಕೆ ದೊರಕಿದ ಜಯವನ್ನು ಸಂಭ್ರಮಿಸಿ, ಪ್ರೀತಿ ಆದರಗಳಿಂದ ಬರಮಾಡಿಕೊಂಡ ಪರಿ. ಕಾರ್ಯಕರ್ತರ ಪ್ರೀತಿ ವಿಶ್ವಾಸ ಗೌರವಕ್ಕೆ ಮನದುಂಬಿ ಬಂತು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಸತ್ಕಾರಗಳಿಗೆ ನಾನೆಂದಿಗೂ ಚಿರಋಣಿ.ನನ್ನ ಸಂಕಷ್ಟದ ಸ್ಥಿತಿಯಲ್ಲಿ ನನಗೆ ಬೆಂಬಲವಾಗಿ ನಿಂತು ಅನ್ಯಾಯದ ವಿರುದ್ಧ ಹೋರಾಡಲು ಆತ್ಮವಿಶ್ವಾಸ ನೀಡಿದ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು. #ಸತ್ಯಮೇವಜಯತೇ BJP Karnataka
Dr. Ravi C. T 🇮🇳 ಡಾ. ರವಿ ಸಿ. ಟಿ45,534 views • 1 year ago

The anti-Hindu mindset of Congress President Mallikarjun Kharge, his habit of mocking and belittling Hindu traditions, keeps coming out whenever he gets a platform. Shri Mallikarjuna Kharge, what is the connection between Hindu religious practices and poverty? If you have the courage to ridicule Hindu beliefs, why do you lack the courage to speak in the same tone about other religions? Wearing the cap of another faith and kneeling to pray in their style is not a problem for you. But when Prime Minister Narendra Modi ji follows his own faith, it suddenly becomes objectionable? The Somnath Temple was destroyed by your “brothers’” attacks, yet even after a thousand years, it has risen again as a symbol of Hindu resilience and Indian civilisation. Does celebrating that revival look like superstition to you? You may insult tradition of Budubudike as superstition, but Lord Shiva, who holds the damaru, is our revered God, and the Budubudike who follow him are our own people too. Why are you spreading blatant lies by claiming that people in Iran are on the streets for food and vandalising government offices? In reality, people in Iran—especially women—are protesting against religious oppression. They are fighting for democracy, rejecting Islamic rule, and demanding the restoration of their Persian heritage. People are not fools to blindly believe whatever you say from a stage. Did you not mock the grand Kumbh Mela, one of the greatest expressions of Hindu faith? Perhaps you should ask the Karnataka Congress government whether insulting Hindu beliefs also comes under the so-called hate speech law.
Dr. Ravi C. T 🇮🇳 ಡಾ. ರವಿ ಸಿ. ಟಿ17,016 views • 4 months ago

Maharashtra Police raid a drug factory in Bengaluru. Delhi Police bust a drug racket in Mysuru. Gujarat Police expose illegal operations running inside the Bengaluru RTO. And what are the Karnataka Police doing? Getting caught red-handed while taking lakhs in bribes from ordinary people—and proudly arresting people like Puneeth Kerehalli, who point out illegal Bangladeshi migrants! When it comes to real crime, other states’ police do the job. When it comes to harassing whistleblowers and collecting bribes, our police are fully “self-reliant.” What a performance!
Dr. Ravi C. T 🇮🇳 ಡಾ. ರವಿ ಸಿ. ಟಿ14,096 views • 4 months ago

ಭಾರತೀಯ ಹಿಂದೂಗಳು ಎಚ್ಚರಗೊಳ್ಳದಿದ್ದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಕ್ರೌರ್ಯವನ್ನು ಕಡೆಗಣಿಸಿದರೆ, ಅಪಾಯ ನಾಳೆ ನಮ್ಮ ಮನೆ ಬಾಗಿಲಿಗೇ ಬರಲಿದೆ. ಬಾಂಗ್ಲಾದೇಶದಲ್ಲಿ “ದೀಪು ಚಂದ್ರ ದಾಸ್” ಎಂಬ ವ್ಯಕ್ತಿಯನ್ನು ಹಿಂದು ಎಂಬ ಒಂದೇ ಒಂದು ಕಾರಣಕ್ಕಾಗಿ ಇಸ್ಲಾಮಿಕ್ ಮೂಲಭೂತವಾದಿಗಳು ಕ್ರೂರವಾಗಿ ಹತ್ಯೆ ಮಾಡಿರುವುದು ಆತಂಕಕಾರಿ ಘಟನೆ. ಇದು ಅನ್ಯ ಅಸ್ತಿತ್ವವನ್ನು ನಾಶ ಮಾಡಬೇಕು ಎನ್ನುವ ರಿಲಿಜನ್ನಿನ ಮನಸ್ಥಿತಿಯ ಪರಿಣಾಮ. “ಕುರಾನ್ ಮತ್ತು ಮೊಹಮ್ಮದ್ ಪೈಗಂಬರ್” ಎಂಬ ಎರಡು ವಿಚಾರವನ್ನು ಮುಂದಿಟ್ಟುಕೊಂಡು ಯಾರನ್ನು ಬೇಕಾದರೂ, ಏನು ಬೇಕಾದರೂ ಮಾಡುತ್ತೇವೆ ಎನ್ನುವುದು, ಕುಕೃತ್ಯಗಳನ್ನು ಸಮರ್ಥಿಸುವುದು ಮಾನವತೆಗೆ ಅಂಟಿದ ಕಳಂಕ. ತಮಗಾಗದವರ ಬಗ್ಗೆ ಒಂದು ಸುಳ್ಳು ಕಥೆಯನ್ನು ಕಟ್ಟಿಕೊಂಡು, ಅವರನ್ನು ಕ್ರೂರವಾಗಿ ಕೊಲ್ಲುವಂತೆ ತಮ್ಮ ಗುಂಪಿನವರನ್ನು ಪ್ರಚೋದಿಸುವ ತಂತ್ರ ಇದು. ಇಂತಹ ಸಂದರ್ಭಗಳಲ್ಲಿ ಯಾವುದೇ ನ್ಯಾಯಾಂಗ ಪ್ರಕ್ರಿಯೆ, ಮಾನವ ಹಕ್ಕುಗಳು ಅಥವಾ ಕಾನೂನು ಎಂಬ ಅಂಶಗಳಿಗೆ ಅಸ್ತಿತ್ವವೇ ಇಲ್ಲ. ಈ ಕ್ರೌರ್ಯ ಹೊಸದಲ್ಲ. ಇತಿಹಾಸದ ಪುಟಗಳನ್ನ ತಿರುಗಿಸಿ ನೋಡಿದರೆ, ಏಳನೇ ಶತಮಾನದಿಂದಲೇ ಈ ರೀತಿಯ ಮತಾಂಧ ಹಿಂಸೆ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿದೆ. ದೇಶಗಳು ಬದಲಾಗಿವೆ, ಕಾಲಮಾನ ಬದಲಾಗಿದೆ; ಆದರೆ ಇತರರ ವಿರುದ್ಧದ ದ್ವೇಷ ಮತ್ತು ಅದನ್ನು ರಿಲಿಜನ್ನಿನ ಹೆಸರಿನಲ್ಲಿ ಸಮರ್ಥಿಸುವ ಮನೋಭಾವ ಮಾತ್ರ ಮುಂದುವರಿದಿದೆ. ಇದರ ಪರಿಣಾಮಗಳನ್ನು ನಾವು ಈಗಾಗಲೇ ಅಫ್ಘಾನಿಸ್ತಾನ, ಪಾಕಿಸ್ತಾನ, ಇದೀಗ ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ನೋಡಿದ್ದೇವೆ. ಇದನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸದಿದ್ದರೆ, ಗಡಿ ದಾಟಿ ಬಂದೀತು! ಮತಾಂಧತೆ ಯಾವತ್ತೂ ಒಂದು ಭೂಭಾಗಕ್ಕೆ ಅಥವಾ ದೇಶಕ್ಕೆ ಸೀಮಿತವಾಗಿರುವುದಿಲ್ಲ. ಅದು ಅವಕಾಶ ಸಿಕ್ಕಲ್ಲಿ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ಹೋಗುತ್ತದೆ. ಆದ್ದರಿಂದ, ಈ ವಿಚಾರವನ್ನು ಭಾರತ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಇದು ಕೇವಲ ವಿದೇಶಾಂಗ ನೀತಿಯ ವಿಷಯ ಮಾತ್ರವಲ್ಲ, ಇದು ರಾಷ್ಟೀಯ ಭದ್ರತೆ, ಸಾಮಾಜಿಕ ಸಾಮರಸ್ಯ ಮತ್ತು ಭವಿಷ್ಯದ ತಲೆಮಾರಿನ ಸುರಕ್ಷತೆಗೆ ಸಂಬಂಧಿಸಿದ ಪ್ರಶ್ನೆ. ಅದೇ ರೀತಿ, ಇದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಜೊತೆಗೆ ಹಿಂದೂ ಸಮಾಜವೂ ಎಚ್ಚೆತ್ತುಕೊಳ್ಳಬೇಕು. ಅಂದರೆ ಭಯ, ಆತಂಕ, ದ್ವೇಷ ಅಥವಾ ಪ್ರತೀಕಾರದ ಮನಸ್ಥಿತಿಯಿಂದಲ್ಲ; ಆದರೆ ವಾಸ್ತವವನ್ನು ಅರ್ಥಮಾಡಿಕೊಂಡು, ಸಂಘಟಿತವಾಗಿ, ಹಿಂದೂ ಜಾಗೃತಿಯಿಂದ ಪ್ರತಿಕ್ರಿಯಿಸಬೇಕಾದ ಅಗತ್ಯವಿದೆ. ಹಿಂದೂ ಸಮಾಜ ಇನ್ನೂ ಜಾತಿ ಮತ ಎಂದು ಬಡಿದಾಡದೆ, ನಾವೆಲ್ಲ ಒಂದಾಗಿ ನಿಂತುಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ರಾಜಕೀಯ ಲಾಭ–ನಷ್ಟಗಳ ವಿಷಯವಲ್ಲ. ಇದು ಮಾನವೀಯ ಮೌಲ್ಯಗಳು ಉಳಿಯಬೇಕೆ ಅಥವಾ ಮತಾಂಧ ಕ್ರೌರ್ಯಕ್ಕೆ ಸಮಾಜ ಶರಣಾಗಬೇಕೆ ಎಂಬ ಮೂಲಭೂತ ಪ್ರಶ್ನೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮತಾಂಧರ ಸ್ಟ್ರೀಟ್ ಪವರ್’ಗೆ ಸಂವಿಧಾನ, ಕಾನೂನು ಸೋಲುವ ಕಾಲ ದೂರವಿಲ್ಲ.
Dr. Ravi C. T 🇮🇳 ಡಾ. ರವಿ ಸಿ. ಟಿ14,756 views • 5 months ago

ಇಸ್ಲಾಮಿಕ್ ಜೆಹಾದಿಗಳ ಕುತಂತ್ರಕ್ಕೆ ಬಲಿಯಾದ ಹಿಂದುತ್ವದ ಕಾರ್ಯಕರ್ತ, ಕಟ್ಟರ್ ಹಿಂದುತ್ವವಾದಿ ಸುಹಾಸ್ ಶೆಟ್ಟಿಯ ಹತ್ಯೆ ಅಮಾನವೀಯ. ಎದೆಯೆತ್ತರಕ್ಕೆ ಬೆಳೆದ ಮಗ ಇನ್ನಿಲ್ಲ ಎಂಬ ನೋವಿನಲ್ಲಿರುವ ಹೆತ್ತವರ, ಅವರ ಕುಟುಂಬದ ಕಣ್ಣೀರಗೆ ಹೇಗೆ ಸಾಂತ್ವನ ಹೇಳಬೇಕು ಎಂದು ತೋಚದಾಗಿದೆ. ತನ್ನ ಸರ್ವಸ್ವವನ್ನೂ ಹಿಂದೂ ಸಮಾಜದ ರಕ್ಷಣೆಗೆ ನೀಡಿದ ಅಪ್ಪಟ ಹಿಂದೂವಾದಿಯೊಬ್ಬರನ್ನು ಕಳೆದುಕೊಂಡ ನೋವು, ದುಃಖ ತಡೆಯಲಾಗುತ್ತಿಲ್ಲ. ಹಿಂದುಗಳಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲವಂದರೆ, ಪೊಲೀಸರು, ಸರ್ಕಾರ, ಕಾನೂನು ರಕ್ಷಣೆ ವ್ಯವಸ್ಥೆಗಳು ಯಾರಿಗಾಗಿ? ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು, ಹಿಂದುಗಳಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲವೆಂದಾದರೆ ಹೇಳಿ, ನಮ್ಮ ರಕ್ಷಣೆಗೆ ಬೇಕಾದ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ.
Dr. Ravi C. T 🇮🇳 ಡಾ. ರವಿ ಸಿ. ಟಿ19,579 views • 1 year ago

My heartfelt admiration to my incredible Grandma, who is undertaking a Padayatra with the noble goal of sending divine blessings to our brave Indian soldiers (ADG PI - INDIAN ARMY, Indian Air Force , SpokespersonNavy), Hon’ble Prime Minister Shri Narendra Modi ji, and UP Chief Minister Shri Yogi Adityanath. Her selfless devotion, unwavering spirit, and dedication to the well-being of our nation are truly inspiring. May her journey be blessed and may her efforts continue to spread love, strength, and positivity! 🙏 #Padayatra #Blessings #India #Inspiration
Dr. Ravi C. T 🇮🇳 ಡಾ. ರವಿ ಸಿ. ಟಿ14,144 views • 1 year ago

ಬೆಳಗಾವಿಯಲ್ಲಿ ನಡೆದ ಸಂಗತಿ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಅಥವಾ ವೈಯುಕ್ತಿಕ ವಿಚಾರವಾಗಿ ನೋಡಬಾರದು. ಸಿ ಟಿ ರವಿ ಇಲ್ಲಿ ನಿಮಿತ್ತ ಮಾತ್ರ, ಇದು ಶಾಸಕಾಂಗದ, ಶಾಸಕರ ಹಕ್ಕಿನ ಪ್ರಶ್ನೆ. ನಾನು ಇವತ್ತು ಇರುತ್ತೇನೆ, ನಾಳೆ ಹೋಗುತ್ತೇನೆ. ಈ ವ್ಯವಸ್ಥೆ ಹಾಗೆ ಇರುತ್ತದೆ, ಇದನ್ನು ರಕ್ಷಿಸುವ ಕೆಲಸ ಆಗಬೇಕು. ಇದು ಸದನದ, ಸಭಾಪತಿಗಳ, ಸದಸ್ಯರ ಗೌರವದ ಪ್ರಶ್ನೆ.
Dr. Ravi C. T 🇮🇳 ಡಾ. ರವಿ ಸಿ. ಟಿ11,567 views • 1 year ago

ನಿಮ್ಮ ಪಹಣಿಯಲ್ಲಿ ವಖ್ಫ್ ಆಸ್ತಿ ಎಂದು ನಮೂದಾದರೆ ಹೆದರಬೇಡಿ. ನಿಮ್ಮ ಜೊತೆಗೆ ನಾವು ನಿಲ್ಲುತ್ತೆವೆ. ವಖ್ಫ್ ಬೋರ್ಡಿನ ಅನಾಚಾರವನ್ನು ಎದುರಿಸಲು ನಿಮ್ಮ ಜೊತೆಗೆ BJP ನಿಲ್ಲಲಿದೆ. ಕಾಂಗ್ರೇಸ್ ಅವರ ಜೊತೆಗೆ ನಿಂತಿದೆ, ಹೆದರದಿರಿ ನಾವು ನಿಮ್ಮೊಂದಿಗೆ ನಿಲ್ಲುತ್ತೆವೆ. ಅವರು ಅನಾಚಾರ ಆರಂಭಿಸಿದ್ದಾರೆ, ನಾವು ಈ ಅನಾಚಾರಕ್ಕೆ ಅಂತ್ಯ ಹಾಡುತ್ತೇವೆ.
Dr. Ravi C. T 🇮🇳 ಡಾ. ರವಿ ಸಿ. ಟಿ13,157 views • 1 year ago
