
ನಮ್ಮ ನಾಡು ನಮ್ಮ ಆಳ್ವಿಕೆ
@karnatakaparty1 • 4,064 subscribers
Voice of Kannada, Kannadiga, Karnataka. A people’s movement evolving into a political force. For those who believe in #ನಮ್ಮನಾಡು_ನಮ್ಮಆಳ್ವಿಕೆ.
Videos

ಅಕ್ರಮವಾಗಿ ಸರ್ಕಾರಿ ಜಾಗದಲ್ಲಿದ್ದವರ ಸಮೀಕ್ಷೆ ಮಾಡುತ್ತಿರುವ ಪರಿ ಇದು! ಎಷ್ಟು ನಿಜ ಎಷ್ಟು ಸುಳ್ಳು? ಪೆನಗೊಂಡ ಅಂತೆ, ಹಿಂದಿ ಅಂತೆ! ಕೈನಲ್ಲಿ ತೆಲಗು ಚೀಲ. ಜೊತೆಗಿರುವವರು ಮಾತನಾಡುತ್ತಿರುವುದು ಉರ್ದು! ವಲಸಿಗರ ವೋಟ್ ಬ್ಯಾಂಕ್ ಮಾಡಿಕೊಂಡು ಕರ್ನಾಟಕವನ್ನು ಅವರಿಗೆ ಬಿಟ್ಟುಕೊಡುತ್ತಿದೆ ಕಾಂಗ್ರೆಸ್ ಸರ್ಕಾರ. #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ23,315 次观看 • 6 个月前

ಹುಸಿ ರಾಷ್ಟ್ರೀಯತೆ ಹೆಸರಿನಲ್ಲಿ ಕನ್ನಡಿಗರನ್ನು ದಿಕ್ಕು ತಪ್ಪಿಸುತ್ತಿದ್ದ ವಿದ್ಯಾ ಮಲ್ನಾಡ್ ಅವರಿಗೆ ಸರಿಯಾಗಿ ತಿರುಗೇಟು ಕೊಟ್ಟ, "ನಮ್ಮ ನಾಡು ನಮ್ಮ ಆಳ್ವಿಕೆ"ಯ ಸದಸ್ಯರೂ ಹಾಗೂ "ಕರ್ನಾಟ ಬಲ" ಪುಟದ ಭುವನೇಶ್ ಅವರು. ಕರ್ಣಾಟಬಲ - karnatabala #ಹಿಂದಿ_ಪರೀಕ್ಷೆ_ನಿಲ್ಲಿಸಿ #StopHindiExams #TwoLanguagePolicy #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ13,737 次观看 • 3 个月前

ಹಿಂದಿ ಹೇರಿಕೆಗೆ ಬಲಿಯಾದ ಮತ್ತೊಂದು ಬದುಕು! "12 ವರ್ಷಗಳ ಹಿಂದೆ 10ನೇ ತರಗತಿಯಲ್ಲಿ ಹಿಂದಿ ಫೇಲ್ ಆಗಿದ್ದಕ್ಕೆ ಓದು ನಿಲ್ಲಿಸಬೇಕಾಯ್ತು, ಇವತ್ತು ಆಟೋ ಓಡಿಸಿ ಜೀವನ ನಡೆಸುತ್ತಿದ್ದೇನೆ. ನಮ್ಮ ರಾಜ್ಯದಲ್ಲಿ ಕಡ್ಡಾಯ ಹಿಂದಿ ಇಲ್ಲದಿದ್ದರೆ ನನ್ನ ಬದುಕು ಬೇರೆಯೇ ಇರುತ್ತಿತ್ತು. ಬೇರೆ ರಾಜ್ಯದವರಿಗೆ ಇಲ್ಲದ ಕನ್ನಡದ ಅನಿವಾರ್ಯತೆ, ನಮಗೇಕೆ ಅವರ ಹಿಂದಿಯ ಕಡ್ಡಾಯ?" ಇದು ಹಿಂದಿ ಹೇರಿಕೆಯಿಂದ ತಮ್ಮ ಬದುಕಿನ ದಿಕ್ಕೇ ಬದಲಾಯಿತು ಎನ್ನುವ ಕನ್ನಡಿಗ ಕಾರ್ತಿಕ್ ಅವರ ನೋವಿನ ನುಡಿ. ಇದು ಕಾರ್ತಿಕ್ ಅವರೊಬ್ಬರ ಕಥೆಯಲ್ಲ, ತ್ರಿಭಾಷಾ ನೀತಿಯೆಂಬ ಅವೈಜ್ಞಾನಿಕ ವ್ಯವಸ್ಥೆಯಿಂದಾಗಿ ಕರ್ನಾಟಕದಲ್ಲಿ ಅದೆಷ್ಟೋ ಯುವಕರ ಭವಿಷ್ಯ ಹೀಗೆಯೇ ಮೊಟಕಾಗಿದೆ. ನಮ್ಮ ಮಕ್ಕಳಿಗೆ ಅವರ ಭಾಷೆಯಲ್ಲಿ ಕಲಿಯುವ ಹಕ್ಕನ್ನು ಕಸಿದುಕೊಳ್ಳುವ ಈ ಅನ್ಯಾಯ ನಿಲ್ಲಬೇಕು. ಕರ್ನಾಟಕದಲ್ಲಿ ಹಿಂದಿ ಹೇರಿಕೆ ಕೊನೆಗೊಂಡು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನೊಳಗೊಂಡ ದ್ವಿಭಾಷಾ ನೀತಿ ಜಾರಿಯಾಗಲೇಬೇಕು. CM of Karnataka Madhu Bangarappa #ದ್ವಿಭಾಷಾನೀತಿಜಾರಿಯಾಗಲಿ #ImplementTwoLanguagePolicy #StopHindiImposition #ಹಿಂದಿಹೇರಿಕೆನಿಲ್ಲಿಸಿ #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ10,868 次观看 • 9 个月前

ಧ್ರುವ್ ರಾಠಿ ಅವರು ತಮ್ಮ ಇತ್ತೀಚಿನ ಪಹಲ್ಗಾಂ ಘಟನೆ ಕುರಿತ ವಿಡಿಯೋದಲ್ಲಿ ಕನ್ನಡಿಗರ ಸ್ವಾಭಿಮಾನದ ಹೋರಾಟವನ್ನು ಭಯೋತ್ಪಾದಕ ಕೃತ್ಯಗಳೊಂದಿಗೆ ಹೋಲಿಸಿರುವುದು ಅತ್ಯಂತ ಖಂಡನೀಯ. ಇದು ಕನ್ನಡಿಗರ ಶಾಂತಿಯುತ ಹೋರಾಟದ ನೈತಿಕತೆಯನ್ನು ಪ್ರಶ್ನಿಸುವಂತಾಗಿದೆ. ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟ ಸಂವಿಧಾನಬದ್ಧವಾದ ಹಕ್ಕು. ಇಂತಹ ಹೇಳಿಕೆಗಳು ಸಮಾಜದಲ್ಲಿ ವಿಭಜನೆ ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ, ಇಂತಹ ಹೇಳಿಕೆಗಳನ್ನು ಧೃವ್ ರಾಠಿಯವರು ತಕ್ಷಣವೇ ಹಿಂತೆಗೆದುಕೊಂಡು, ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ಕಾಪಾಡುವಲ್ಲಿ ಸಹಕರಿಸಬೇಕು. #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ12,646 次观看 • 1 年前
没有更多内容可加载