
ನಿರ್ಭಾವುಕ
@nirbhaavuka • 7,763 subscribers
ಭಾರತೀಯ ಹಿಂದೂ ಕನ್ನಡಿಗ | Bharatiya Hindu Kannadiga RTs are not endorsements.
Shorts
Videos

That’s Kannada matinee legend Rajkumar pulling off intricate yoga asanas! In the 1983 film 'Kaamanabillu', a 53-year-old Rajkumar played a spirited rural youth championing Bharateeya tradition & cultural pride with style and spine! Happy International Yoga Day! #YogaDay2025
ನಿರ್ಭಾವುಕ24,382 次观看 • 11 个月前

ಗಂಜಿ ಗಂಗರಾಜು ಬಂದಿದ್ದಾನೆ ಈಗ ಕಮಲ ಹಾಸನ್ ರಕ್ಷಣೆಗೆ. ಸ್ಟಾಲಿನ್ ತೆಂಕಣವನ್ನು ಕಟ್ಟುತ್ತಾನಂತೆ - ಇವರ ಪಿಂಡ ನಾಯಿ ತಿನ್ನಾ. ಇವನಿಗೆ ಇಡೀ ತೆಂಕಣವನ್ನು ಒಂದುಗೂಡಿಸಿ, ರಕ್ಷಿಸಿದ್ದು ವಿಜಯನಗರದ ಕರ್ಣಾಟ ಸಾಮ್ರಾಜ್ಯ ಅಂತ ಗೊತ್ತಿಲ್ವಾ? ಓಹ್, ಅದು ಹಿಂದೂ ಸಾಮ್ರಾಜ್ಯ..ಮತ್ತು ಇವನಿಗೆ ಹಿಂದೂ ಅಂದ್ರೆ ಅಲರ್ಜಿ! ಆಲ್ರೈಟ್, ಎಷ್ಟು ದಿನ ಈ ಆಟ..?
ನಿರ್ಭಾವುಕ24,322 次观看 • 1 年前
3:23
Sensitive content
This media may contain sensitive content.

ಕರ್ನಾಟಕ ಲೋಕಸೇವಾ ಆಯೋಗ ಎಷ್ಟು ಭ್ರಷ್ಟಗೆಟ್ಟಿದೆ ಎನ್ನುವುದಕ್ಕೆ ಇತ್ತೀಚಿನ ಕೆಪಿಎಸ್ಸಿ ಪರೀಕ್ಷೆಯೇ ಜ್ವಲಂತ ನಿದರ್ಶನ. ಕುಂಟುನೆಪ ಹೇಳಿಕೊಂಡು ವಾರದ ದಿನ ಪರೀಕ್ಷೆಯಿಟ್ಟು ಅರ್ಧದಷ್ಟು ಮಂದಿ ಆಕಾಂಕ್ಷಿಗಳು ಪರೀಕ್ಷೆಗೆ ಬಾರದೇ ಇರುವಂತೆ ನೋಡಿಕೊಳ್ಳುವುದು ಒಂದು ಹಂತದ ಕುತ್ಸಿತ ಬುದ್ಧಿಯಾದರೆ, ಬೇಕಂತಲೇ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳನ್ನು ಮುದ್ರಿಸಿ ಬಂದ ಆಕಾಂಕ್ಷಿಗಳಲ್ಲಿ ಗೊಂದಲ ಉಂಟುಮಾಡಿ ಕೈತೊಳೆದುಕೊಳ್ಳುವುದು ಎರಡನೆಯ ಹಂತದ ಕುತ್ಸಿತ ಮನೋಭಾವ. ಗೂಗಲ್ ಅನುವಾದ ಕೂಡ ಮಾಡಲಾರದಷ್ಟು ದಟ್ಟದರಿದ್ರವಾದ ಕನ್ನಡ ಅವತರಣಿಕೆಯಿಂದ ಆಕಾಂಕ್ಷಿಗಳು ಬೇಸತ್ತು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ೮ ಕ್ಕಿಂತ ಹೆಚ್ಚಿನ ಪ್ರಶ್ನೆಗಳಲ್ಲಿ ಗೊಂದಲವಿದ್ದರೆ ಮರುಪರೀಕ್ಷೆ ನಡೆಸಬೇಕೆನ್ನುವ ಕಾನೂನನ್ನು ಕಾಂಗ್ರೆಸ್ ಸರ್ಕಾರ ಖಂಡಿತ ಪಾಲಿಸುವುದಿಲ್ಲ. ಯಾಕಂದ್ರೆ, ಮೀಡಿಯಾ ಪ್ರಕಾರ ಸೀಟುಗಳು ಅದಾಗಲೇ ಮಾರಾಟವಾಗಿವೆ. ಈ ಹೀನಾತಿಹೀನ ಕನ್ನಡ ಅನುವಾದ ಬೇಕಂತಲೇ ಮಾಡಿರುವ ಹುನ್ನಾರ ಎನ್ನವುದು ಪ್ರತಿಯೊಬ್ಬ ಕನ್ನಡಿಗನೂ ಮಾತನಾಡಿಕೊಳ್ಳುತ್ತಿರುವ ಸಂಗತಿ. ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವವರು ಕನ್ನಡಿಗರೇ ಅಲ್ಲವೇ? ಅಂದಮೇಲೆ ಈ ಕಾಂಗ್ರೆಸ್ ಸರ್ಕಾರಕ್ಕೇಕೆ ಕನ್ನಡಿಗರ ಮೇಲೆ ಇಷ್ಟು ದ್ವೇಷ? ವೀರ ಸಾವರ್ಕರ್ ಮೇಲ್ಸೇತುವೆಯ ನಾಮಫಲಕ ಕೆಡವುವುದಕ್ಕೆ ಬೀದಿಗಿಳಿದ, ಲೇ ಮಾರ್ವಾಡಿ ನೆಕ್ಸ್ಟ್ ನೀನೇ ಎನ್ನುತ್ತಾ ಬೀದಿ ಬೀದಿ ಅಲೆದ ಓಲಾಟಗಳು ಈಗ ಕಾಂಗ್ರೆಸ್ ಹಾಕಿದ ಬಿಸ್ಕೆಟ್ ಬಾಯಲ್ಲಿಟ್ಟುಕೊಂಡು, ನಾಮಕಾವಸ್ಥೆಗೆ ಒಂದು ಟುವ್ವಿ ಹಾಕಿ 'ನಾವು ಇದರ ವಿರುದ್ಧ ದನಿ ಎತ್ತಿದ್ದೀವಿ' ಅಂತ ತೋರಿಕೆಯಾಟ ಆಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಆಗಿದೆ. ನೀಟ್ ಪರೀಕ್ಷೆಯ ಬಗ್ಗೆ ಇಲ್ಲಸಲ್ಲದ ಕೊಂಕೆತ್ತುವ ಕಾಂಗ್ರೆಸ್ ನಾಯಕರ ಕೈವಾಡದಿಂದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ. ಇದರ ನ್ಯಾಯತೀರ್ಮಾನ ಇಂದಲ್ಲ ನಾಳೆ ಆಗಿಯೇ ತೀರಲಿದೆ.
ನಿರ್ಭಾವುಕ15,454 次观看 • 1 年前
没有更多内容可加载