
Prajavani
@prajavani • 326,747 subscribers
Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆ
Shorts
Videos

ತಲವಾರ್ ಜಳಪಿಸಿದ ಯತ್ನಾಳ ಬೆಂಬಲಿಗ ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶನಿವಾರ ನಡೆದ ವಿಜಯೋತ್ಸವದ ವೇಳೆ ಅವರ ಬೆಂಬಲಿಗನೊಬ್ಬ ತಲವಾರ್ ಜಳಪಿಸಿದ್ದಾನೆ. ಯತ್ನಾಳ ಬೆಂಬಲಿಗನ ಈ ಕಾರ್ಯಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ. #KarnatakaAssemblyElectionResults
Prajavani671,663 views • 3 years ago

ಬೆಂಗಳೂರಿನ ಚರ್ಚ್ಸ್ಟ್ರೀಟ್ನಲ್ಲಿ ಶನಿವಾರ (ಫೆ.22) ಸಂಜೆ, ಸೈಲೆನ್ಸರ್ನ ಮಫ್ಲರ್ ತೆಗೆದು ಕರ್ಕಶ ಸದ್ದಿನೊಂದಿಗೆ, ಬೆಂಕಿಯುಗುಳುವಂತೆ ಮಾರ್ಪಡಿಸಲಾಗಿದ್ದ ಕಾರಿದು. ಪಾದಚಾರಿಗಳು, ಅಂಗಡಿ–ಕಚೇರಿಗಳ ಸಿಬ್ಬಂದಿ ಈ ಶಬ್ದಕ್ಕೆ ಬೆಚ್ಚಿಬಿದ್ದರು. ಪ್ರತೀ ವಾರಾಂತ್ಯ, ಮಾರ್ಪಾಡು ಮಾಡಿದ ಇಂತಹ ಕಾರುಗಳ ಹಾವಳಿ ಸಾಮಾನ್ಯವಾಗಿದೆ. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
Prajavani85,489 views • 1 year ago
0:25
Sensitive content
This media may contain sensitive content.

ಕೊಪ್ಪಳ ಜಿಲ್ಲೆಯಲ್ಲಿ ಕಾರ್ಖಾನೆಗಳು ಹೊರ ಬಿಡುತ್ತಿರುವ ಕಪ್ಪು ದೂಳಿನ ಮಾಲಿನ್ಯದಿಂದ ನಲುಗಿ ಹೋಗಿರುವ ಗ್ರಾಮಸ್ಥರ ಕಣ್ಣೀರಿನ ಕಥೆಗಳನ್ನು ನೋಡಿ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಾವುಕರಾಗಿ ಕಣ್ಣೀರು ಸುರಿಸಿದರು. ಬಲ್ದೋಟಾ ಸ್ಟೀಲ್ ಕಾರ್ಖಾನೆ ವಿರೋಧಿಸಿ ನಡೆದ ಕೊಪ್ಪಳ ಬಂದ್ನಲ್ಲಿ ಈ ಘಟನೆ ನಡೆದಿದೆ. #koppal #gavishree
Prajavani28,217 views • 1 year ago

‘ಮುಖ್ಯಮಂತ್ರಿ ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದು ಬಿಟ್ಟ. ಸಿಎಂ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಮೊದಲು ಭೇಟಿ ಮಾಡಿಸಿದವನು ನಾನು. ಅವನ ಗ್ರಹಚಾರ ಚೆನ್ನಾಗಿತ್ತು ಸಿಎಂ ಆದ’ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಮೊಬೈಲ್ ಫೋನ್ನಲ್ಲಿ ಆಪ್ತರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Prajavani21,569 views • 11 months ago

ರಾಧಿಕಾ ಕುಮಾರಸ್ವಾಮಿ ಎಚ್ಡಿಕೆಗೆ ಕರಿಯ ಎಂದಾಗ ಸಮಸ್ಯೆಯಾಗಿರಲಿಲ್ಲ: ತೇಜಸ್ವಿನಿ ಗೌಡಹದ #hdkumaraswamy
Prajavani25,441 views • 1 year ago

ಮಂಚೇನಹಳ್ಳಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಬಂಡಿರಾಮನಹಳ್ಳಿ, ಕನಗಾನಕೊಪ್ಪ, ರಾಯನಕಲ್ಲು ಗ್ರಾಮಗಳ ಸಮೀಪದ ಬೆಟ್ಟಗುಡ್ಡಗಳಲ್ಲಿ ಕಲ್ಲುಗಣಿಗಾರಿಕೆ, ಗಣಿಗಾರಿಕೆ ಲಾರಿಗಳ ಓಡಾಟಕ್ಕೆ ದಾರಿ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಬುಧವಾರ ಗಲಾಟೆ ನಡೆದಿದೆ. ಗಣಿ ಮಾಲೀಕ ಸಕಲೇಶ್ ಎಂಬಾತ ಸ್ಥಳೀಯ ರೈತ ರವಿ ಎಂಬುವವರ ಮೇಲೆ ಗುಂಡು ಹಾರಿಸಿದ್ದಾನೆ.
Prajavani15,712 views • 1 year ago
No more content to load