
DK Shivakumar
@DKShivakumar • 697,808 subscribers
ಕನ್ನಡಿಗ | Chief Minister, Karnataka | Congressman
Shorts
Videos

ಹುದ್ದೆ ಏನೇ ಇರಲಿ, ಜನರ ಜೊತೆಗಿನ ಈ ಆತ್ಮೀಯತೆ ಯಾವತ್ತೂ ಬದಲಾಗದು, ನಿಮ್ಮ ಮಾತು ಕೇಳುವುದು ನನ್ನ ಕರ್ತವ್ಯ, ನಿಮ್ಮ ಜೊತೆ ನಿಲ್ಲುವುದು ನನ್ನ ಸಂಕಲ್ಪ. ಮುಂಜಾನೆಯ ಮಾರುಕಟ್ಟೆಯಲ್ಲಿ ಶ್ರಮಜೀವಿ ಬಂಧುಗಳ ಆತ್ಮೀಯ ಮಾತುಕತೆ, ನಿಮ್ಮ ಪ್ರೀತಿಯ ನಡುವೆ ಒಟ್ಟಿಗೆ ಸವಿದ ಬಿಸಿ ಇಡ್ಲಿ, ಕುಡಿದ ಒಂದು ಲೋಟ ಕಾಫಿ. ಬೆವರ ಹನಿಯನ್ನೇ ಬಂಡವಾಳವಾಗಿಸಿ ದುಡಿಯುವ ನಿಮ್ಮ ಈ ಮುಖಗಳಲ್ಲೇ ನನಗೆ ಕಾಯಕವೇ ಕೈಲಾಸದ ನಿಜವಾದ ದರ್ಶನ..
DK Shivakumar92,898 views • 20 hours ago

ಇಂದು ಕೂಡ್ಲಿಗಿಯಲ್ಲಿ ಆಯೋಜಿಸಲಾಗಿದ್ದ 'ಪ್ರಜಾಸೇವೆ ಇಲಾಖೆ'ಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಹೆಣ್ಣುಮಗಳೊಬ್ಬಳು ಅಭಿಮಾನದಿಂದ ಕೈಯಾರೆ ಬಿಡಿಸಿದ ನನ್ನ ಚಿತ್ರವನ್ನು ಪ್ರೀತಿಯಿಂದ ಉಡುಗೊರೆಯಾಗಿ ನೀಡಿದಳು. ಇದೇ ವೇಳೆ ಪುಟ್ಟ ಮಗುವೊಂದು ಕೈಗಿತ್ತ ಹೂವು ನನ್ನ ಮೇಲಿಟ್ಟ ನಂಬಿಕೆಯ ಸಂಕೇತ; ಜೊತೆಗೆ ಅವಳಂತಹ ಅನೇಕ ಪುಟಾಣಿಗಳ ಭವಿಷ್ಯವನ್ನು ಕಾಯುವ ಹೊಣೆಗಾರಿಕೆ ನನ್ನ ಮೇಲಿದೆ ಎನ್ನುವ ಎಚ್ಚರಿಕೆ. ಒಬ್ಬ ಪ್ರಜಾಸೇವಕನಿಗೆ ಜನರ ಈ ನಿಷ್ಕಲ್ಮಶ ಪ್ರೀತಿಗಿಂತ ಮಿಗಿಲಾದ ಉಡುಗೊರೆ ಇನ್ನೇನಿದೆ?
DK Shivakumar82,341 views • 3 days ago

ನೀನೊಲಿದರೆ ಕೊರಡು ಕೊನರುವುದಯ್ಯ ನೀನೊಲಿದರೆ ಬರಡು ಹಯನಹುದಯ್ಯ ನೀನೊಲಿದರೆ ವಿಷವಮೃತವಹುದಯ್ಯ ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು ಕೂಡಲಸಂಗಮದೇವ ಬಾಗಲಕೋಟೆ ಜಿಲ್ಲೆಯ ಪವಿತ್ರ ಕೂಡಲಸಂಗಮದಲ್ಲಿ ಸುಪ್ರಸಿದ್ಧ ಸಂಗಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ ಭಕ್ತಿಪೂರ್ವಕ ಕ್ಷಣಗಳು..
DK Shivakumar17,710 views • 3 days ago

ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ನಮ್ಮ ಸಿದ್ದರಾಮಯ್ಯನವರು. ಮೈಸೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ, ಬೆಳೆದು, ಹೋರಾಟದ ಮೂಲಕ ರಾಜಕೀಯಕ್ಕೆ ಬಂದು, ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನನ್ನ ಆತ್ಮೀಯರಾದ ಶ್ರೀ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಹಾಗೂ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಜನಮಾನಸದಲ್ಲಿ ನೆಲೆಸಿರುವ ಅವರು, ಭಾರತೀಯ ರಾಜಕಾರಣದ ಧೀಮಂತ ನಾಯಕ. ಜನಪರ ಯೋಜನೆಗಳಿಂದ ಹಿಡಿದು ರಾಜ್ಯದಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಸುಮಾರು ಐವತ್ತು ವರ್ಷಗಳ ಅವರ ಅಗಾಧ ರಾಜಕೀಯ ಅನುಭವ, ಸಾಮಾಜಿಕ ಕಳಕಳಿ ಮತ್ತು ಜನಪರ ಯೋಜನೆಗಳು ಸದಾ ಸ್ಮರಣೀಯ. 2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದಲೂ ಇಂದಿನವರೆಗೆ, ಸಿದ್ದರಾಮಯ್ಯನವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಜೊತೆಯಾಗಿ ನಿಂತಿದ್ದಾರೆ. ಅವರ ಆಡಳಿತದಲ್ಲಿ ನಾನು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದು ನನ್ನ ಭಾಗ್ಯ. ಮುಂದಿನ ದಿನಗಳಲ್ಲೂ ರಾಜ್ಯದ ಹಿತದೃಷ್ಟಿಯಿಂದ ಹಾಗೂ ನಮ್ಮ ಪಕ್ಷದ ಬಲವರ್ಧನೆಗೆ ಅವರ ಮಾರ್ಗದರ್ಶನ, ಹಿರಿಯ ಅನುಭವ ನಮಗೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತೇನೆ. ಕರ್ನಾಟಕದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯೋಣ. Siddaramaiah
DK Shivakumar374,648 views • 3 months ago

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್ಶಿಪ್ ಯೋಜನೆಗೆ ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ. ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿದ್ದರೆ, ನಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ. ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ 50% ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದು. ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ. ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಹಕಾರವಿರಲಿ.
DK Shivakumar62,131 views • 1 month ago

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಒಂದು ವರ್ಷದ ಪಯಣ - ನವ ಬೆಂಗಳೂರು ನಿರ್ಮಾಣದ ಹೆಜ್ಜೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿ ಇಂದಿಗೆ ಒಂದು ವರ್ಷ. ಆಡಳಿತ ವಿಕೇಂದ್ರೀಕರಣ ಹಾಗೂ ಜನಸ್ನೇಹಿ ಆಡಳಿತ ನೀಡುವ ಸಲುವಾಗಿ ವರ್ಷದ ಹಿಂದೆ 5 ನಗರ ಪಾಲಿಕೆಗಳನ್ನು ನಿರ್ಮಿಸಲಾಯಿತು. ಇದರಿಂದ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಉತ್ತಮ ಯೋಜನೆ ರೂಪಿಸಲು ಸಾಧ್ಯವಾಗುತ್ತಿದ್ದು, ಈ ಅಭಿವೃದ್ಧಿ ಪಯಣವು ಇನ್ನಷ್ಟು ವೇಗ ಪಡೆಯಲಿದೆ. ಭವಿಷ್ಯದ ಬೆಂಗಳೂರನ್ನು ಜನಸ್ನೇಹಿ, ಸುಗಮ ಹಾಗೂ ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲರೂ ಕೈಜೋಡಿಸಿ. One year of Greater Bengaluru Authority marks the beginning of a new chapter in how Namma Bengaluru is governed. We have moved beyond the limitations of a single BBMP structure to a more decentralised model of five city corporations under the GBA, bringing administration closer to citizens while enabling integrated planning for the entire city. This new governance framework gives us the opportunity to plan better, respond faster and deliver more effectively. We have begun the journey, and together, we will build a Greater Bengaluru that is ready for the future. Greater Bengaluru Authority
DK Shivakumar12,576 views • 6 days ago

Bengaluru is shaping the future of innovation. From India’s first Quantum City to deeper Karnataka - US partnerships in research, skilling and technology, we are building bridges from classrooms to laboratories, startups to global markets. Glimpses from the inauguration of QUANTUM at Science Gallery Bengaluru - celebrating the spirit of discovery, innovation and the possibilities shaping our future.
DK Shivakumar39,516 views • 1 month ago

𝐖𝐞 𝐬𝐭𝐚𝐧𝐝 𝐰𝐢𝐭𝐡 𝐬𝐭𝐮𝐝𝐞𝐧𝐭𝐬, 𝐚𝐧𝐝 𝐰𝐞 𝐰𝐢𝐥𝐥 𝐟𝐢𝐠𝐡𝐭 𝐮𝐧𝐭𝐢𝐥 𝐞𝐯𝐞𝐫𝐲 𝐬𝐭𝐮𝐝𝐞𝐧𝐭 𝐠𝐞𝐭𝐬 𝐣𝐮𝐬𝐭𝐢𝐜𝐞.
DK Shivakumar56,753 views • 1 month ago

Congress party's victory is Karnataka's victory- a hard earned one! Our guarantees for our people are the guiding force of our vision for the state and we shall get down to implementation right away. This is a huge mandate for our leaders and workers who have worked hard for this win. My heartfelt congratulations to all!
DK Shivakumar902,814 views • 3 years ago

Today, along with CM Shri Siddaramaiah and officials, I undertook city rounds to inspect rain affected areas. Visuals from my visit to Manyata Tech Park to review flooding issues and rain preparedness. We are committed to providing long term solutions to Bengaluru. ಮಳೆಯಿಂದ ಹಾನಿ ಉಂಟಾಗಿರುವ ಮಾನ್ಯತಾ ಟೆಕ್ ಪಾರ್ಕ್ ಗೆ ಮುಖ್ಯಮಂತ್ರಿಗಳೊಂದಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದೆ. ಬಿಬಿಎಂಪಿ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಥಳದಲ್ಲೇ ಚರ್ಚಿಸಿ, ತಕ್ಷಣ ಅನುಷ್ಠಾನಕ್ಕೆ ಸೂಚಿಸಿದ್ದೇವೆ. #BengaluruRains
DK Shivakumar340,754 views • 1 year ago

Bengaluru’s roads are getting the attention they need, and repair work is already underway. Funds have been allocated, contractors have started work and have been given strict deadlines. We are committed to providing our people with safer and smoother travel.
DK Shivakumar263,304 views • 11 months ago

Delighted to speak with the Honourable Prime Minister of Malaysia, who called to convey his warm wishes on my new responsibility as Chief Minister of Karnataka. Our discussion focused on strengthening ties between Karnataka and Malaysia, particularly in education, technology, innovation, and people-to-people exchanges. With many Malaysian students pursuing their education in Karnataka, there is immense potential to deepen our partnership. I look forward to visiting Malaysia and was pleased to invite the Honourable Prime Minister to Karnataka as we work towards meaningful collaboration and shared progress. Anwar Ibrahim Pejabat Perdana Menteri Malaysia
DK Shivakumar79,414 views • 3 months ago

Honoured to share the stage with PM Shri Narendra Modi avaru as we laid the foundation stone for Bengaluru Metro Phase-3 - a transformative project worth over ₹15,610 crore. As Bengaluru’s in-charge minister, my commitment is to ensure our city gets the infrastructure it deserves. I submitted a memoradum and urged the PM for funds and approvals for key projects that will power Namma Bengaluru to build the India of tomorrow. #NammaBengaluru | #DialogueForProgress
DK Shivakumar266,825 views • 1 year ago