
V. Somanna
@VSOMANNA_BJP • 38,721 subscribers
Union Minister of State for the Ministry of Jal Shakti and the Ministry of Railways | Member of Parliament, Tumakuru Lok Sabha Constituency
Videos

ಮಂಗಳೂರು ರೈಲ್ವೆ ಜಾಲವನ್ನು ಕೇರಳದ ಪಾಲಕ್ಕಾಡ್ನಿಂದ ಮೈಸೂರು ವಲಯಕ್ಕೆ ಸೇರ್ಪಡೆಗೊಳಿಸಿದ್ದಕ್ಕೆ ಮಾಜಿ ಸಚಿವರು, ಕರಾವಳಿ ಭಾಗದ ಪ್ರಮುಖ ನಾಯಕರಾದ ಶ್ರೀ ಪ್ರಮೋದ್ ಮಧ್ವರಾಜ್ ಅವರು ನಮ್ಮನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಈ ಪ್ರಕ್ರಿಯೆಯಲ್ಲಿ ಬೆಂಬಲವಾಗಿ ನಿಂತ ಶ್ರೀ ಪ್ರಮೋದ್ ಮಧ್ವರಾಜ್ ಆದಿಯಾಗಿ ಈ ಭಾಗದ ಎಲ್ಲಾ ಸಂಸದರು, ಶಾಸಕರುಗಳು ಹಾಗೂ ಮುಖಂಡರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. Pramod Madhwaraj
V. Somanna20,169 views • 14 days ago

ಕೇರಳದ ಪಾಲಕ್ಕಾಡ್ ವಿಭಾಗದಲ್ಲಿದ್ದ ಮಂಗಳೂರು ರೈಲ್ವೆ ಜಾಲವನ್ನು ನೈಋತ್ಯ ರೈಲ್ವೆ ಮೈಸೂರು ವಲಯಕ್ಕೆ ಸೇರ್ಪಡೆ ಮಾಡಿರುವಂತಹದ್ದು ಅತ್ಯಂತ ಐತಿಹಾಸಿಕ ನಿರ್ಧಾರ. ರಾಜ್ಯದ ಜನತೆಯ ವಿಶೇಷವಾಗಿ ಮಂಗಳೂರು ಭಾಗದ ಜನತೆಯ 23 ವರ್ಷಗಳ ಬೇಡಿಕೆಯನ್ನು ಈಡೇರಿಸಲು ಸಹಕರಿಸಿದ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರಿಗೆ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. The integration of the Mangaluru railway network, previously under Kerala’s Palakkad Division, into the Mysuru Division of South Western Railway is a truly historic decision. This fulfils the long-standing 23-year demand of the people of Karnataka, particularly the people of Mangaluru and coastal Karnataka. Heartfelt gratitude to Hon’ble Prime Minister Shri Narendra Modi Ji and Hon’ble Union Minister for Railways Shri Ashwini Vaishnaw Ji for their support and commitment in making this landmark decision a reality.
V. Somanna22,248 views • 25 days ago

ರೈಲಿನಲ್ಲಿ ಚಿತ್ರದುರ್ಗಕ್ಕೆ ಪ್ರಯಾಣಿಸುವ ವೇಳೆ ರೈಲ್ವೆ ಅಧಿಕಾರಿಗಳೊಂದಿಗೆ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ಪ್ರಸ್ತುತಪಡಿಸಿದ 137ನೇ ಸಂಚಿಕೆಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು. Listened to the inspiring 137th episode of #MannKiBaat by Hon’ble PM Shri Narendra Modi ji today alongside railway officials, while travelling by train to Chitradurga. #MannKiBaat
V. Somanna17,788 views • 19 days ago

ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದ ನಮ್ಮ ಸರ್ಕಾರದ ಬದ್ಧತೆಯಿಂದ ಬೆಂಗಳೂರು ಸಬ್ಅರ್ಬನ್ ರೈಲು ಯೋಜನೆ ಕಾಮಗಾರಿ ಭರದಿಂದ ಸಾಗಿದೆ. 🔹 ಕಾರಿಡಾರ್ 1: ದೇವನಹಳ್ಳಿ ಏರ್ಪೋರ್ಟ್ ಮಾರ್ಗಕ್ಕೆ ಅನುಮೋದನೆ & ಸಮೀಕ್ಷೆ ಪೂರ್ಣ 🔹 ಕಾರಿಡಾರ್ 2 & 4 : ಭೂಸ್ವಾಧೀನ ಪೂರ್ಣ, ನಿಲ್ದಾಣ ಮತ್ತು ವಯಡಕ್ಟ್ ನಿರ್ಮಾಣದಲ್ಲಿ ಪ್ರಗತಿ 🔹 ಕಾರಿಡಾರ್ 3 : ಮಾರ್ಗ ವಿನ್ಯಾಸಕ್ಕೆ ಗ್ರೀನ್ ಸಿಗ್ನಲ್! ನಮ್ಮ ಮೆಟ್ರೋ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಮತ್ತು ಪ್ರಮುಖ ಐಟಿ ಹಬ್ಗಳನ್ನು ಸಂಪರ್ಕಿಸುವ ಈ ಯೋಜನೆ ಬೆಂಗಳೂರಿನ ಸಂಚಾರ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸಲಿದೆ. #SuburbanRail #NammaBengaluru
V. Somanna18,987 views • 4 months ago

ರೈಲ್ವೆ ಮೂಲಸೌಕರ್ಯವನ್ನು ವೃದ್ಧಿಗೊಳಿಸುವ ಮತ್ತು ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸುವ ಭಾಗವಾಗಿ, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿಮೀ ಘಾಟ್ ವಿಭಾಗದ ರೈಲ್ವೆ ಮಾರ್ಗವನ್ನು ಯಶಸ್ವಿಯಾಗಿ ವಿದ್ಯುದೀಕರಣಗೊಳಿಸಲಾಗಿದೆ. ಅತ್ಯಂತ ಸವಾಲಿನ ಭೂಪ್ರದೇಶದಲ್ಲಿ ಸಾಧಿಸಿದ ಈ ಮೈಲಿಗಲ್ಲು ಆಧುನಿಕ ಮತ್ತು ಶುದ್ಧ-ಶಕ್ತಿ ಮೂಲಸೌಕರ್ಯ ನಿರ್ಮಾಣದೆಡೆಗಿನ ಭಾರತೀಯ ರೈಲ್ವೆಯ ದೃಢ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದೀಗ, ಈ ರೈಲ್ವೆ ಮಾರ್ಗವು ವಿದ್ಯುತ್ ಚಾಲನೆಗೆ ಸಂಪೂರ್ಣವಾಗಿ ಸಿದ್ದಗೊಂಡಿದ್ದು, ಪರಿಣಾಮಕಾರಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ ಮತ್ತು ಈ ಭಾಗದಲ್ಲಿ ಮತ್ತಷ್ಟು ರೈಲ್ವೆ ಮೂಲಸೌಕರ್ಯಗಳ ಪ್ರಗತಿಗೆ ಸಹಾಯಕವಾಗಲಿದೆ. As part of strengthening railway infrastructure and enhancing passenger convenience, the 55-km ghat section between Sakleshpura and Subrahmanya Road has been successfully electrified.Executed across one of the most challenging ghat terrains, this milestone underscores Indian Railways’ firm commitment to modern, resilient, and clean-energy infrastructure.The route is now fully ready for electric traction, enabling cleaner, faster, and more efficient train operations while paving the way for further railway infrastructure expansion in the region.
V. Somanna24,498 views • 8 months ago
No more content to load