正在加载视频...

视频加载失败

ಇದು ಪಾಲನೆ ಆದರೆ ಅನುಕೂಲವಾಗುತ್ತದೆ!!

34,663 次观看 • 1 年前 •via X (Twitter)

0 条评论

暂无评论

原始帖子的评论将显示在这里

相关视频

ಕನ್ನಡಿಗರೇ ಇದು ನಿಮ್ಮ ಅಸ್ತಿತ್ವದ ಪ್ರಶ್ನೆ! ಬ್ಯಾಂಕ್ ಮುಂದೆ ನಿಂತ ರೈತನ ಕೈಯಲ್ಲಿ ಮಣ್ಣಿನ ವಾಸನೆ, ಬೆವರಿನ ಗುರುತು. ಅವನ ಕಣ್ಣಲ್ಲಿ ಭರವಸೆ. ಆದರೆ ಬ್ಯಾಂಕ್ ಒಳಗಿರುವ ವ್ಯವಸ್ಥೆಯ ಕಣ್ಣಲ್ಲಿ ಅವನು “ಅಪಾಯ”. ಇದೇ ಬ್ಯಾಂಕ್‌ಗಳು ಟೈ–ಕೋಟು ಧರಿಸಿದ ಪರ ಭಾಷಿಕ ಐಷಾರಾಮಿ ವ್ಯಕ್ತಿಯನ್ನು ಕಂಡರೆ ಕೆಂಪು ಹಾಸು ಹಾಸಿ ಸ್ವಾಗತಿಸುತ್ತವೆ. ಇದು ಯಾವ ನ್ಯಾಯ? ಇದು ಯಾವ ವ್ಯವಸ್ಥೆ? ದೇವನಹಳ್ಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ರೈತ ಲೋನ್ ವಿಚಾರವಾಗಿ ಬಂದರೆ ಕಡೆಗಣಿಸಿ, ಯಾರೋ ಐಷಾರಾಮಿ ವ್ಯಕ್ತಿಗೆ ಆದ್ಯತೆ ನೀಡುವುದು. ಕನ್ನಡ, ಕನ್ನಡಿಗ, ಕರ್ನಾಟಕಕ್ಕಾಗಿ KRS ಪಕ್ಷ👍 ಇನ್ನೂ ಕೆಲ ಬ್ಯಾಂಕುಗಳು ಕರ್ನಾಟಕದಲ್ಲಿ ತಮ್ಮ ವರ್ತನೆಗಳು ತಿದ್ದಿಕೊಂಡಿಲ್ಲ, ಪ್ರತಿಯೊಬ್ಬ ಕನ್ನಡಿಗರು ಪ್ರಶ್ನೆ ಮಾಡಿ... #SBI #ದೇವನಹಳ್ಳಿ ಸಾರ್ವಜನಿಕ ಸಂಪರ್ಕ ಕೇಂದ್ರ ದೇವನಹಳ್ಳಿ #ಕರ್ನಾಟಕರಾಷ್ಟ್ರಸಮಿತಿ #karnataka #CMofKarnataka #

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party

20,158 次观看 • 6 个月前

ಟರ್ಕಿ ಹಾಗೂ ಚೀನಾ ಮುಕ್ತವಾಗಿಯೇ ಪಾಕಿಸ್ತಾನದ ಜೊತೆಗೆ ಗುರುತಿಸಿಕೊಂಡವು. ನಮ್ಮ ಜೊತೆಗೆ ಒಬ್ಬರಾದರೂ ಅಧಿಕೃತವಾಗಿ ಬಂದರೇ? ಪ್ರಾಮಾಣಿಕವಾಗಿ ಹೇಳಲಿ. ನೂರಾರು ದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಪ್ರಧಾನಿಗಳು, ಅಧ್ಯಕ್ಷರನ್ನು ಮೋದಿಯವರು ಅಪ್ಪಿಕೊಂಡರು. ಇವರಲ್ಲಿ ಒಬ್ಬರಾದರೂ ಪಾಕಿಸ್ತಾನದ ಕೃತ್ಯವನ್ನು ಖಂಡಿಸಿದರೇ? ಈಗ ಬಾಯ್ಕಾಟ್ ಟರ್ಕಿ, ಬಾಯ್ಕಾಟ್ ಅಜರ್ ಬಾಯಿಜಾನ್ ಎನ್ನುತ್ತಿದ್ದಾರೆ, ಆದರೆ ಅಮೇರಿಕದವರು ಟರ್ಕಿಗೆ 300 ಮಿಸೈಲ್ ಕೊಟ್ಟಿದ್ದಾರೆ, ಈಗ ಬಾಯ್ಕಾಟ್ ಅಮೇರಿಕ ಎಂದು ಏಕೆ ಹೇಳುತ್ತಿಲ್ಲ? ಬಾಯ್ಕಾಟ್ ಚೀನಾ ಎಂದು ಏಕೆ ಹೇಳುತ್ತಿಲ್ಲ? ಇದು ಇವರ ಸಾಮರ್ಥ್ಯ, "ಹಿಂದು ಹೃದಯ ಸಾಮ್ರಾಟ, ವಿಶ್ವಗುರು" ಟೈಟಲ್‌ಗಳನ್ನು ಇವರಿಗೆ ಇವರೇ ಕೊಟ್ಟುಕೊಂಡಿದ್ದಾರೆ, ಇದು ಇವರ ಪದ್ಧತಿ. - Priyank Kharge / ಪ್ರಿಯಾಂಕ್ ಖರ್ಗೆ

Karnataka Congress

16,305 次观看 • 1 年前

ಭಾರತೀಯ ಹಿಂದೂಗಳು ಎಚ್ಚರಗೊಳ್ಳದಿದ್ದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಕ್ರೌರ್ಯವನ್ನು ಕಡೆಗಣಿಸಿದರೆ, ಅಪಾಯ ನಾಳೆ ನಮ್ಮ ಮನೆ ಬಾಗಿಲಿಗೇ ಬರಲಿದೆ. ಬಾಂಗ್ಲಾದೇಶದಲ್ಲಿ “ದೀಪು ಚಂದ್ರ ದಾಸ್” ಎಂಬ ವ್ಯಕ್ತಿಯನ್ನು ಹಿಂದು ಎಂಬ ಒಂದೇ ಒಂದು ಕಾರಣಕ್ಕಾಗಿ ಇಸ್ಲಾಮಿಕ್ ಮೂಲಭೂತವಾದಿಗಳು ಕ್ರೂರವಾಗಿ ಹತ್ಯೆ ಮಾಡಿರುವುದು ಆತಂಕಕಾರಿ ಘಟನೆ. ಇದು ಅನ್ಯ ಅಸ್ತಿತ್ವವನ್ನು ನಾಶ ಮಾಡಬೇಕು ಎನ್ನುವ ರಿಲಿಜನ್ನಿನ ಮನಸ್ಥಿತಿಯ ಪರಿಣಾಮ. “ಕುರಾನ್ ಮತ್ತು ಮೊಹಮ್ಮದ್ ಪೈಗಂಬರ್” ಎಂಬ ಎರಡು ವಿಚಾರವನ್ನು ಮುಂದಿಟ್ಟುಕೊಂಡು ಯಾರನ್ನು ಬೇಕಾದರೂ, ಏನು ಬೇಕಾದರೂ ಮಾಡುತ್ತೇವೆ ಎನ್ನುವುದು, ಕುಕೃತ್ಯಗಳನ್ನು ಸಮರ್ಥಿಸುವುದು ಮಾನವತೆಗೆ ಅಂಟಿದ ಕಳಂಕ. ತಮಗಾಗದವರ ಬಗ್ಗೆ ಒಂದು ಸುಳ್ಳು ಕಥೆಯನ್ನು ಕಟ್ಟಿಕೊಂಡು, ಅವರನ್ನು ಕ್ರೂರವಾಗಿ ಕೊಲ್ಲುವಂತೆ ತಮ್ಮ ಗುಂಪಿನವರನ್ನು ಪ್ರಚೋದಿಸುವ ತಂತ್ರ ಇದು. ಇಂತಹ ಸಂದರ್ಭಗಳಲ್ಲಿ ಯಾವುದೇ ನ್ಯಾಯಾಂಗ ಪ್ರಕ್ರಿಯೆ, ಮಾನವ ಹಕ್ಕುಗಳು ಅಥವಾ ಕಾನೂನು ಎಂಬ ಅಂಶಗಳಿಗೆ ಅಸ್ತಿತ್ವವೇ ಇಲ್ಲ. ಈ ಕ್ರೌರ್ಯ ಹೊಸದಲ್ಲ. ಇತಿಹಾಸದ ಪುಟಗಳನ್ನ ತಿರುಗಿಸಿ ನೋಡಿದರೆ, ಏಳನೇ ಶತಮಾನದಿಂದಲೇ ಈ ರೀತಿಯ ಮತಾಂಧ ಹಿಂಸೆ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿದೆ. ದೇಶಗಳು ಬದಲಾಗಿವೆ, ಕಾಲಮಾನ ಬದಲಾಗಿದೆ; ಆದರೆ ಇತರರ ವಿರುದ್ಧದ ದ್ವೇಷ ಮತ್ತು ಅದನ್ನು ರಿಲಿಜನ್ನಿನ ಹೆಸರಿನಲ್ಲಿ ಸಮರ್ಥಿಸುವ ಮನೋಭಾವ ಮಾತ್ರ ಮುಂದುವರಿದಿದೆ. ಇದರ ಪರಿಣಾಮಗಳನ್ನು ನಾವು ಈಗಾಗಲೇ ಅಫ್ಘಾನಿಸ್ತಾನ, ಪಾಕಿಸ್ತಾನ, ಇದೀಗ ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ನೋಡಿದ್ದೇವೆ. ಇದನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸದಿದ್ದರೆ, ಗಡಿ ದಾಟಿ ಬಂದೀತು! ಮತಾಂಧತೆ ಯಾವತ್ತೂ ಒಂದು ಭೂಭಾಗಕ್ಕೆ ಅಥವಾ ದೇಶಕ್ಕೆ ಸೀಮಿತವಾಗಿರುವುದಿಲ್ಲ. ಅದು ಅವಕಾಶ ಸಿಕ್ಕಲ್ಲಿ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ಹೋಗುತ್ತದೆ. ಆದ್ದರಿಂದ, ಈ ವಿಚಾರವನ್ನು ಭಾರತ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಇದು ಕೇವಲ ವಿದೇಶಾಂಗ ನೀತಿಯ ವಿಷಯ ಮಾತ್ರವಲ್ಲ, ಇದು ರಾಷ್ಟೀಯ ಭದ್ರತೆ, ಸಾಮಾಜಿಕ ಸಾಮರಸ್ಯ ಮತ್ತು ಭವಿಷ್ಯದ ತಲೆಮಾರಿನ ಸುರಕ್ಷತೆಗೆ ಸಂಬಂಧಿಸಿದ ಪ್ರಶ್ನೆ. ಅದೇ ರೀತಿ, ಇದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಜೊತೆಗೆ ಹಿಂದೂ ಸಮಾಜವೂ ಎಚ್ಚೆತ್ತುಕೊಳ್ಳಬೇಕು. ಅಂದರೆ ಭಯ, ಆತಂಕ, ದ್ವೇಷ ಅಥವಾ ಪ್ರತೀಕಾರದ ಮನಸ್ಥಿತಿಯಿಂದಲ್ಲ; ಆದರೆ ವಾಸ್ತವವನ್ನು ಅರ್ಥಮಾಡಿಕೊಂಡು, ಸಂಘಟಿತವಾಗಿ, ಹಿಂದೂ ಜಾಗೃತಿಯಿಂದ ಪ್ರತಿಕ್ರಿಯಿಸಬೇಕಾದ ಅಗತ್ಯವಿದೆ. ಹಿಂದೂ ಸಮಾಜ ಇನ್ನೂ ಜಾತಿ ಮತ ಎಂದು ಬಡಿದಾಡದೆ, ನಾವೆಲ್ಲ ಒಂದಾಗಿ ನಿಂತುಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ರಾಜಕೀಯ ಲಾಭ–ನಷ್ಟಗಳ ವಿಷಯವಲ್ಲ. ಇದು ಮಾನವೀಯ ಮೌಲ್ಯಗಳು ಉಳಿಯಬೇಕೆ ಅಥವಾ ಮತಾಂಧ ಕ್ರೌರ್ಯಕ್ಕೆ ಸಮಾಜ ಶರಣಾಗಬೇಕೆ ಎಂಬ ಮೂಲಭೂತ ಪ್ರಶ್ನೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮತಾಂಧರ ಸ್ಟ್ರೀಟ್ ಪವರ್’ಗೆ ಸಂವಿಧಾನ, ಕಾನೂನು ಸೋಲುವ ಕಾಲ ದೂರವಿಲ್ಲ.

Dr. Ravi C. T 🇮🇳 ಡಾ. ರವಿ ಸಿ. ಟಿ

14,793 次观看 • 7 个月前