Basanagouda R Patil (Yatnal)'s banner
Basanagouda R Patil (Yatnal)'s profile picture

Basanagouda R Patil (Yatnal)

@BasanagoudaBJP63,646 subscribers

Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]

Shorts

ಗ್ಯಾರಂಟಿ ಯೋಜನೆಗಳು ಕೇವಲ ವೋಟು ಪಡೆಯುವುದಕ್ಕೆ ಹೊರತು ಜನರ ಅಭ್ಯುದಯಕ್ಕೆ, ಕಲ್ಯಾಣಕ್ಕಲ್ಲ ಎಂದು ಈ ವಿಡಿಯೋ ಮೂಲಕ ಜನ ತಿಳಿದುಕೊಳ್ಳಬೇಕು. ಮುಗ್ಧ ಗ್ರಾಮಸ್ಥರನ್ನು ಹೆದರಿಸಿ, ಬೆದರಿಸಿ ಪ್ರತಿಭಟನೆಗೆ ಕರೆಯುತ್ತಿರುವುದು ಹೇಯ ಹಾಗೂ ಖಂಡನೀಯ. ಕಾಂಗ್ರೆಸ್ ಪಕ್ಷದ ನೈತಿಕತೆ ಪಾತಾಳಕ್ಕೆ ಕುಸಿದಿದೆ. ಕಾಂಗ್ರೆಸ್ ಚುನಾವಣೆ ಗೆದ್ದಿರುವುದು ಈ ರೀತಿ ಸುಳ್ಳುಗಳಿಂದ ಎಂದು ಬಿಡಿಸಿ ಹೇಳಬೇಕಾಗಿಲ್ಲ. The Congress party is asking innocent villagers to support Siddaramaih else face withdrawal of free Guarantee schemes. One of their messengers in the video quotes that the Guarantee Schemes shall be withdrawn if villagers do not come openly to support Siddaramaih who is facing allegations of misuse of power, fabrication of documents and using his clout to get MUDA sites. The Congress party has stooped to a new low in Politics. The Party with a history of more than hundred years is now blackmailing people to protect its tainted leader. TV9 Kannada I Asianet Suvarna News I NewsFirst Kannada I kannadaprabha I Prajavani I Vijay Karnataka I Vijayavani Digital I South First I Deccan Herald

ಗ್ಯಾರಂಟಿ ಯೋಜನೆಗಳು ಕೇವಲ ವೋಟು ಪಡೆಯುವುದಕ್ಕೆ ಹೊರತು ಜನರ ಅಭ್ಯುದಯಕ್ಕೆ, ಕಲ್ಯಾಣಕ್ಕಲ್ಲ ಎಂದು ಈ ವಿಡಿಯೋ ಮೂಲಕ ಜನ ತಿಳಿದುಕೊಳ್ಳಬೇಕು. ಮುಗ್ಧ ಗ್ರಾಮಸ್ಥರನ್ನು ಹೆದರಿಸಿ, ಬೆದರಿಸಿ ಪ್ರತಿಭಟನೆಗೆ ಕರೆಯುತ್ತಿರುವುದು ಹೇಯ ಹಾಗೂ ಖಂಡನೀಯ. ಕಾಂಗ್ರೆಸ್ ಪಕ್ಷದ ನೈತಿಕತೆ ಪಾತಾಳಕ್ಕೆ ಕುಸಿದಿದೆ. ಕಾಂಗ್ರೆಸ್ ಚುನಾವಣೆ ಗೆದ್ದಿರುವುದು ಈ ರೀತಿ ಸುಳ್ಳುಗಳಿಂದ ಎಂದು ಬಿಡಿಸಿ ಹೇಳಬೇಕಾಗಿಲ್ಲ. The Congress party is asking innocent villagers to support Siddaramaih else face withdrawal of free Guarantee schemes. One of their messengers in the video quotes that the Guarantee Schemes shall be withdrawn if villagers do not come openly to support Siddaramaih who is facing allegations of misuse of power, fabrication of documents and using his clout to get MUDA sites. The Congress party has stooped to a new low in Politics. The Party with a history of more than hundred years is now blackmailing people to protect its tainted leader. TV9 Kannada I Asianet Suvarna News I NewsFirst Kannada I kannadaprabha I Prajavani I Vijay Karnataka I Vijayavani Digital I South First I Deccan Herald

16,312 Aufrufe

Videos

BasanagoudaBJP's profile picture

ಇಂದು ನಡೆದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಸಾಲು ಸಾಲು ದೋಷಗಳು ಕಂಡು ಬಂದಿವೆ. OMR sheet ಹಾಗೂ ಪ್ರಶ್ನೆ ಪತ್ರಿಕೆ mismatch ಆಗಿದೆ ಎಂದು ಪರೀಕ್ಷಾರ್ಥಿಗಳು ದೂರಿದ್ದಾರೆ. ಇನ್ನು ಕೆಲವೆಡೆ ಪ್ರಶ್ನೆ ಪತ್ರಿಕೆಯನ್ನು ಅರ್ಧ ಗಂಟೆ ತಡವಾಗಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಒಂದೇ ಪರೀಕ್ಷಾ ಕೇಂದ್ರದಲ್ಲಿ ಒಂದು ಬ್ಲಾಕಿನಲ್ಲಿ ಸರಿಯಾದ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಮತ್ತು OMR ಕೊಟ್ಟಿದ್ದಾರೆ ಆದರೆ ಮತ್ತೊಂದು ಬ್ಲಾಕಿನಲ್ಲಿ ಕೊಟ್ಟಿಲ್ಲ. ವಿಜಯಪುರ ಜಿಲ್ಲೆಯ ತಿಕೋಟಾ ಹಾಗೂ ಹಾಸನ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಲೋಪಗಳು ನಡೆದಿವೆ ಎಂದು ಗೊತ್ತಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ವ್ಯವಹಾರವಾಗಿದೆ. ಸಕಾಲದಲ್ಲಿ ಪ್ರಶ್ನೆ ಪತ್ರಿಕೆ ಕೊಡದೆ ಇರುವುದು ಪರೀಕ್ಷಾ ಸಕ್ಷಮ ಪ್ರಾಧಿಕಾರ, ಜಿಲ್ಲಾಡಳಿತಗಳ ವೈಫಲ್ಯತೆಯನ್ನು ತೋರಿಸುತ್ತದೆ. ಹಲವು ವರ್ಷಗಳಿಂದ ಪರೀಕ್ಷೆಯನ್ನು ಎದುರಿಸಲು ಕಾಯುತ್ತಿದ್ದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಇದು ದೊಡ್ಡ ನಿರಾಸೆಯಾಗಿದೆ. ಮುಖ್ಯ ಮಂತ್ರಿಗಳು ಕೂಡಲೇ ಈ ಲೋಪವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು, ಪ್ರಶ್ನೆ ಪತ್ರಿಕೆ ಸಕಾಲದಲ್ಲಿ ಪೂರೈಕೆ ಮಾಡಲು ವಿಫಲರಾದವರ ಮೇಲೆ ಉಗ್ರ ಕ್ರಮ ಕೈಗೊಂಡು ಈ ರೀತಿಯಾದ ತಪ್ಪುಗಳು, ಲೋಪಗಳು ಪುನರಾವರ್ತನೆಯಾಗದಂತೆ, logistics failure ಆಗದಂತೆ ಎಚ್ಚರವಹಿಸಲಿ. ಲೋ(ಪ)ಕ ಆಯೋಗದಲ್ಲಿ ಆಗುತ್ತಿರುವ ಹಗರಣಗಳು ಒಂದಾದರೆ ಮತ್ತೊಂದು ಕಡೆ ಈ ರೀತಿಯಾದ ವೈಫಲ್ಯದಿಂದ ಯುವ ಜನತೆ ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ. ನೇಮಕಾತಿಯಲ್ಲಿ ಹಾಗೂ ನೇಮಕಾತಿ ನಡೆಸುವ ಪ್ರಾಧಿಕಾರಗಳಿಗೆ ಸರ್ಜರಿ ಮಾಡದಿದ್ದರೆ ಯುವ ಸಮೂಹ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದು ನಿಶ್ಚಿತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA I CM of Karnataka I AKSSA OFFICIAL I Kanthakumar R / ಕಾಂತಕುಮಾರ್ ಆರ್ I TV9 Kannada I Vistara News I #PoliceConstableExam

Basanagouda R Patil (Yatnal)

12,392 Aufrufe • vor 10 Tagen

BasanagoudaBJP's profile picture

➜19,020 ಗೃಹಲಕ್ಷ್ಮಿ ಫಲಾನುಭವಿಗಳಿಗೆ ಒಂದೇ ಖಾತೆಗೆ ಹಣಸಂದಾಯ ➜ಒಂದೇ ಬ್ಯಾಂಕ್ ಖಾತೆಗೆ ತಿಂಗಳಿಗೆ 3.8 ಕೋಟಿ ಗೃಹಲಕ್ಷ್ಮಿ ಹಣ ಜಮಾ ಆಗಿದೆ ➜2024-25 CAG ವರದಿಯಲ್ಲಿ ಗೃಹಲಕ್ಷ್ಮಿ ಲೋಪವನ್ನು ಬಹಿರಂಗಗೊಳಿಸಿದೆ ➜1 ವರ್ಷದಲ್ಲಿ 19,020 ಫಲಾನುಭವಿಗಳ ಒಂದೇ ಖಾತೆಗೆ 45 ಕೋಟಿ ದುಡ್ಡು ➜ಒಂದೇ ಬ್ಯಾಂಕ್ ಖಾತೆಯಲ್ಲಿ ಸಾವಿರಾರು ಫಲಾನುಭವಿಗಳ ಹೆಸರು ಲಿಂಕ್ ➜23,262 ಮಹಿಳೆಯರ ಬ್ಯಾಂಕ್ ಖಾತೆ ಇಲ್ಲದಿದ್ದರೂ ಗೃಹಲಕ್ಷ್ಮಿ ಹಣ ಸಂದಾಯ ➜ಬ್ಯಾಂಕ್ ಖಾತೆ ಇಲ್ಲದ ಫಲಾನುಭವಿಗಳ ದುಡ್ಡು ಯಾರದ್ದೋ ಖಾತೆಗೆ ಜಮಾ ➜8,895 ಬ್ಯಾಂಕ್ ಖಾತೆಗಳಿಗೆ ತಿಂಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಹಣ ಜಮೆ ➜ಕೆಲವು ನಿರ್ದಿಷ್ಟ ಖಾತೆಗಳಿಗೆ 1.8 ಕೋಟಿಯಷ್ಟು ಹಣ ಪದೇ ಪದೇ ಪಾವತಿ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಲ್ಲಿ ಆಗಿರುವ ಲೋಪಗಳು ಅತ್ಯಂತ ಗಂಭೀರವಾದದ್ದು. ಇದರ ಉಸ್ತುವಾರಿ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ ಶ್ರೀಮತಿ Laxmi Hebbalkar ಅವರು ಕೂಡಲೇ ರಾಜೀನಾಮೆ ನೀಡಬೇಕು. ವಾಲ್ಮೀಕಿ ನಿಗಮ ಹಗರಣದಂತೆ ಈ ಹಗರಣವನ್ನೂ ಸಹ ಕೇಂದ್ರ ತನಿಖಾ ದಳ (CBI) ತನಿಖೆ ಮಾಡಬೇಕು. ತೆರಿಗೆದಾರರ ಹಣವನ್ನು ಬೇರೆ ಯಾವುದೋ ಖಾತೆಗಳಿಗೆ ಹಾಕಿಕೊಂಡು ಭ್ರಷ್ಟಾಚಾರವೆಸಗುತ್ತಿರುವ ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಫಲಾನುಭವಿಗಳಲ್ಲದ ಖಾತೆಗಳಿಗೆ ಹೋಗಿರುವ ಹಣವನ್ನು ಕೂಡಲೇ ವಾಪಾಸ್ ಪಡೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. CM of Karnataka I TV9 Kannada I

Basanagouda R Patil (Yatnal)

38,015 Aufrufe • vor 1 Monat

BasanagoudaBJP's profile picture

ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರು ಕಳೆದ 450 ದಿನಗಳಿಂದ ಧರಣಿ ಮಾಡುತ್ತಿದ್ದಾರೆ. ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ನಿರ್ಧಾರ ವಿವೇಚನಾರಹಿತವಾದದ್ದು. ಸರ್ಕಾರ ರಿಯಲ್ ಎಸ್ಟೇಟ್ ಲಾಬಿಗೆ ಶರಣಾಗಿದೆ. ಬಿಡದಿಯ ಮಣ್ಣಿನ ಗುಣ ವಿಶಿಷ್ಟವಾಗಿದೆ. ಇಲ್ಲಿ ವಿವಿಧ ಬೆಳೆಗಳನ್ನು ಬೆಳೆಯಬಹುದು (multi cropping). ಬಿಡದಿಯಿಂದ ನಿತ್ಯ 6 ಲಕ್ಷ ಲೀಟರ್ ಹಾಲು ಬೆಂಗಳೂರಿಗೆ ಸರಬರಾಜು ಆಗುತ್ತದೆ. 2 ಲಕ್ಷ ತೆಂಗಿನ ಮರಗಳಿವೆ. ಬಿಡದಿಯಲ್ಲಿ ಯಾರೂ ರೈತರೇ ಇಲ್ಲ, ನಾವು ಟೌನ್ ಶಿಪ್ ಮಾಡುತ್ತೇವೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ಹುರುಳಿಲ್ಲ. ಫಲವತ್ತಾದ ಭೂಮಿ ಸರ್ಕಾರದ ಕೈ ವಶವಾಗಲು ಬಿಡುವುದಿಲ್ಲ. ಹೋರಾಟ ನಿಶ್ಚಿತ. ಬಿಡದಿಯ ರೈತರೊಂದಿಗೆ ನಾನು ಇದ್ದೇನೆ. #BidadiTownshipBeda I #CongressFailsKarnataka I #GBIT

Basanagouda R Patil (Yatnal)

11,350 Aufrufe • vor 2 Monaten

BasanagoudaBJP's profile picture

ನ್ಯಾಯಾಲಯಗಳಲ್ಲಿ ಇರುವ ಬಾಕಿ ಹುದ್ದೆಗಳ ಭರ್ತಿಗೆ, ಮೂಲ ಸೌಕರ್ಯ ಅಭಿವೃದ್ಧಿಗೆ ಹಾಗೂ ನ್ಯಾಯಾಧೀಶರಿಗೆ ವಸತಿ ಸೌಲಭ್ಯ ಕಲ್ಪಿಸಲು ಕಳುಹಿಸಿದ ಪ್ರಸ್ತಾವನೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪದೇ-ಪದೇ ಕಡಿತಗೊಳಿಸುತ್ತಿರುವುದಕ್ಕೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಅರವಿಂದ್ ಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು. ಸಕಾಲದಲ್ಲಿ ತೀರ್ಪುಗಳು, ನ್ಯಾಯ ಸಲ್ಲಿಕೆ ಆಗಬೇಕಾದರೆ ಸರ್ಕಾರ ಸೂಕ್ತ ವ್ಯವಸ್ಥೆ, ಮೂಲಭೂತ ಸೌಕರ್ಯ, ಸರ್ಕಾರಿ ಅಭಿಯೋಜಕರ ನೇಮಕಾತಿಯನ್ನು ತ್ವರಿತ ಗತಿಯಲ್ಲಿ ಮಾಡಬೇಕೆ ವಿನಃ ಪ್ರಸ್ತಾವನೆಯನ್ನು ಕಡಿತಗೊಳಿಸುವುದರಿಂದ ಜನರಿಗೆ ನ್ಯಾಯ ದೊರಕಿಸಿಕೊಡುವುದರಲ್ಲಿ ವಿಳಂಬವಾಗುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಅರವಿಂದ್ ಕುಮಾರ್ ಸರ್ಕಾರದ ವಿಳಂಬ ಧೋರಣೆಯನ್ನು ಟೀಕಿಸಿದ್ದಾರೆ. ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ, ಮುಂದಾಲೋಚನೆಯ ಕೊರತೆ (lack of foresight/planning) ಹಾಗೂ ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ CJI ಸೂರ್ಯಕಾಂತ್ ಶರ್ಮ ಸಮ್ಮುಖದಲ್ಲೇ ಸವಿವರವಾಗಿ, ಅಂಕಿ ಅಂಶಗಳ ಸಮೇತ ವಿವರಿಸಿದರು. ಸರ್ಕಾರದ 'ಭಾಗ್ಯ' ಯೋಜನೆಗಳನ್ನು ಸಮಾಜದ ಧುರೀಣರು, ಚಿಂತಕರು ಟೀಕಿಸಿದಾಗ ರಾಜಕೀಯ ಎಂದು ಬಣ್ಣಿಸುತ್ತಿದ್ದ ಸ'ಮಜಾ'ವಾದಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ 'ಸಿದ್ಧ' ಸೂತ್ರಗಳ ಬಗ್ಗೆ ಈಗ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಅವರ ಸಮ್ಮುಖದಲ್ಲೇ ಟೀಕಿಸುವ ಪ್ರಸಂಗ ಬಂದೊದಗಿದೆ. ಸರ್ಕಾರ ಹಾಗೂ ಮುಖ್ಯ ಮಂತ್ರಿಗಳು ಈಗಲಾದರೂ ಎಚೆತ್ತುಕೊಂಡು ಜನರ ಕಲ್ಯಾಣಕ್ಕಾಗಿ, ನ್ಯಾಯಾಲಯದಲ್ಲಿರುವ ಪ್ರಕರಣಗಳ ತ್ವರಿತ ವಿಲೇವಾರಿ ಮಾಡಲು, ಅಭಿಯೋಜಕರ ನೇಮಕಾತಿ, ಮೂಲಭೂತ ಸೌಕರ್ಯದ ಬಗ್ಗೆ ಗಮನ ಹರಿಸಿ 'ಚುನಾವಣಾ ರಾಜಕೀಯದ' ಚುನಾವಣಾ ರಾಜಕೀಯದ ಮನಃಸ್ಥಿತಿಯಿಂದ ಹೊರಬರಲಿ Justice Arvind Kumar, Hon'ble Supreme Court Judge, strongly criticized the state government for failing to provide the necessary infrastructure, official quarters, and other essential facilities for judicial officers, improving judicial infrastructure in Karnataka despite the rise in cases in the State. This situation is despite the courts providing adequate revenue to the state government in the form of court fees and other charges. Justice Arvind Kumar highlighted the need to augment the infrastructure in view of the increasing number of cases and the need to clear such cases on a war footing to ensure timely justice to the petitioners and the aggrieved. Hon'ble Jus. has clearly pointed out the lack of priority of the state government to improve the legal infrastructure in the state in the presence of the chief minister of Karnataka. The deficiency in administration and lack of priority have been pointed out clearly & concisely by Jus. Kumar. This case is just an example of how the welfare schemes of the government have outweighed development in the state Since the viewpoint on the administration is coming from one of the highest judicial officers of the country, I hope the Congress government makes amends and ensures the priorities of the people are met instead of merely indulging in wooing a certain section of people for vote bank politics. CM of Karnataka I Siddaramaiah I #CongressFailsKarnataka

Basanagouda R Patil (Yatnal)

11,947 Aufrufe • vor 3 Monaten

BasanagoudaBJP's profile picture

ಬಸರೂರು ಕರಾವಳಿಯ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ವರಾಹಿ ನದಿಯ ದಡದಲ್ಲಿದ್ದ ಈ ಬಂದರು, ಕರಾವಳಿ ಮತ್ತು ಒಳನಾಡಿನ ವ್ಯಾಪಾರಕ್ಕೆ ಅನುಕೂಲಕರವಾಗಿತ್ತು. 16-ನೇ ಶತಮಾನದಲ್ಲಿ ಕೆಳದಿಯ ಸಾಮಂತರ ಅಧೀನದಲ್ಲಿದ್ದ ಬಸ್ರೂರು ಬಂದರು ಪೋರ್ಚುಗೀಸರ ವಶವಾಗುತ್ತದೆ.ಇದರಿಂದ ಆತಂಕಗೊಂಡ ಕೆಳದಿಯ ಅರಸರು ಛತ್ರಪತಿ ಶಿವಾಜಿ ಮಹಾರಾಜರ ಸಹಾಯ ಕೇಳುತ್ತಾರೆ. ಫೆಬ್ರವರಿ 13, 1665-ರಂದು ಛತ್ರಪತಿ ಶಿವಾಜಿ ಮಹಾರಾಜರು 50 ಯುದ್ಧನೌಕೆಗಳು ಮತ್ತು 4,000 ಸೈನಿಕರೊಂದಿಗೆ ಪೋರ್ಚುಗೀಸ್ ನಿಯಂತ್ರಿತ ಬಸ್ರೂರು ಬಂದರಿನ ಮೇಲೆ ದಾಳಿ ನಡೆಸಿ, ಅದನ್ನು ಮುಕ್ತಗೊಳಿಸಿದರು. ಪರಮ ಪರಾಕ್ರಮಿ ಛತ್ರಪತಿ ಶಿವಾಜಿ ಮಹಾರಾಜರ ಅಪ್ರತಿಮ ಶೌರ್ಯ, ಉತ್ಕಟ ದೇಶಾಭಿಮಾನದಿಂದ ಬಸ್ರೂರು ಪೋರ್ಚುಗೀಸರ ಆಳ್ವಿಕೆಯಿಂದ ಮುಕ್ತವಾಯಿತು. 13 ಫೆಬ್ರವರಿ 1665 ರಂದು ಶಿವಾಜಿ ಮಹಾರಾಜರ ನೇತೃತ್ವದ ನೌಕಾ ಅಭಿಯಾನದಿಂದ ಪೋರ್ಚುಗೀಸರ ವಿರುದ್ಧ ಸಾಧಿಸಿದ ವಿಜಯ ಗಾಥೆಯ ಅಂಗವಾಗಿ ಬಸ್ರೂರಿನಲ್ಲಿ ಪ್ರತಿ ವರ್ಷ 13 ಫೆಬ್ರವರಿ ಯಂದು ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಪ್ರ-ಪ್ರಥಮ ನೌಕಾ ಅಭಿಯಾನವನ್ನು ಕೈಗೊಂಡು ಬಲಿಷ್ಠ ಪೋರ್ಚುಗೀಸರಿಗೆ ಮಣ್ಣು ಮುಕ್ಕಿಸಿದ ಶ್ರೇಯ, ಕೀರ್ತಿ ಅಪ್ರತಿಮ ಸಾಮ್ರಾಟ, ನೌಕಾ ಸೇನೆಯ ಪಿತಾಮಹ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಬಸ್ರೂರ ಗ್ರಾಮದಲ್ಲಿ ಛತ್ರಪತಿ ಶ್ರೀ ಶಿವಾಜಿ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿರುವ ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವದಂದು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ 🚩🚩

Basanagouda R Patil (Yatnal)

15,564 Aufrufe • vor 5 Monaten