
Vishweshwar Bhat
@VishweshwarBhat • 203,937 subscribers
Editor in Chief - Vishwavani & Pravasi Prapancha I Former Editor - Vijay Karnataka, Kannada Prabha & Suvarna News I Author of 109 books I Thomson UK Fellow
Shorts
Videos

ಭವಾನಿ ರೇವಣ್ಣನವರ ಕಾರಿಗೆ ಯಾವನೋ ಬಡಪಾಯಿ ಗುದ್ದಿದ. ಅದಕ್ಕೆ ಅವರು ಅವನಿಗೆ ಬೇವಾರ್ಸಿ ಸೊಳೆಮಗನೇ ಎಂದು ಬೈದರು. ಅಷ್ಟಕ್ಕೇ ಜಾಲತಾಣಗಳಲ್ಲಿ ಭವಾನಿಯವರನ್ನು ಜನ ಟೀಕಿಸುತ್ತಿದ್ದಾರೆ. ಭವಾನಿ ರೇವಣ್ಣನವರಿಗೆ ಎಷ್ಟು ಬೇಸರವಾಗಿದೆಯೆಂದು ನೀವು ಯೋಚಿಸಿದ್ದೀರಾ? ಅದೇನು ಸಾಮಾನ್ಯ ಕಾರೇ? ಒಂದೂವರೆ ಕೋಟಿ ರೂಪಾಯಿ ಬೆಲೆಬಾಳುವ ಕಾರು! ಪಾಪ, ಎಷ್ಟು ಕಷ್ಟಪಟ್ಟು, ಬೆವರು ಸುರಿಸಿ ಆ ಕಾರನ್ನು ಖರೀದಿಸಿದ್ದರೋ ಏನೋ? ಯಾವನೋ ಅಡ್ಡ ಬಂದು ಗುದ್ದಿದರೆ, ಸುಮ್ಮನೆ ಬಿಡ್ತಾರಾ? ಆ ಬೇವಾರ್ಸಿ ಬೈಕನ್ನು ಬಿಡಬಾರದಿತ್ತು.. ಅವರೇ ಹೇಳಿದಂತೆ, ಸುಟ್ಟು ಹಾಕಬೇಕಿತ್ತು. ಅಕ್ಕನಿಗೆ ಎಷ್ಟು ನೋವಾಗಿರಬಹುದು, ಯಾರಾದರೂ ಯೋಚಿಸಿದ್ದೀರಾ? ದರಿದ್ರ ಮುಂಡೇವು, ಹಳ್ಳಿ ಜನ ರಸ್ತೆಯನ್ನು ತಮ್ಮ ಆಸ್ತಿಯೆಂದು ಭಾವಿಸಿದ್ದಾರೆ. ಅಕ್ಕನ ಕಾರಿಗೆ ಗುದ್ದೋದು ಅಂದ್ರೆ ಏನು? ಕಾರು ಡ್ಯಾಮೇಜ್ ಆದ ದುಃಖವನ್ನು ಭರಿಸುವ ಶಕ್ತಿಯನ್ನು ಭವಾನಿ ರೇವಣ್ಣ ಅವರಿಗೆ ಕರುಣಿಸಲಿ.
Vishweshwar Bhat108,813 次观看 • 2 年前